Home » “ಮುದ್ದು ಕೃಷ್ಣ ಸ್ಪರ್ಧೆಯ ಆತ್ಮೀಯ ಕರೆಯೋಲೆ”
 

“ಮುದ್ದು ಕೃಷ್ಣ ಸ್ಪರ್ಧೆಯ ಆತ್ಮೀಯ ಕರೆಯೋಲೆ”

ಎಕ್ಸಲೆಂಟ್ ಕುಂದಾಪುರ

by Kundapur Xpress
Spread the love

ಭಗವಂತ ಮಹಾವಿಷ್ಣುವಿನ ‘ದಶಾವತಾರ’ಗಳಲ್ಲಿ ಎಂಟನೆಯ ಅವತಾರಿಯಾಗಿ ದ್ವಾಪರ ಯುಗದ ಮಥುರಾ ನಗರದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನದಂದು (ಅಷ್ಟಮಿ) ದೇವಕಿ-ವಸುದೇವರಿಗೆ ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಶ್ರೀಕೃಷ್ಣ ಪರಮಾತ್ಮನು ಜನಿಸಿದ ಈ ಪುಣ್ಯ ದಿನದ ಪ್ರಯುಕ್ತ ನಾಡಿನಾದ್ಯಂತ “ಶ್ರೀ ಕೃಷ್ಣ ಜನ್ಮಾಷ್ಟಮಿ” ದಿನವನ್ನು ಸೆಪ್ಟೆಂಬರ್ 7ರಂದು ಆಚರಿಸುತ್ತಾರೆ. ಅದರಲ್ಲೂ ಉಡುಪಿ ಜಿಲ್ಲೆಯ ಕೇಂದ್ರಬಿಂದುವಾದ ಈ ಸಡಗರದ ‘ಶ್ರೀ ಕೃಷ್ಣಜನ್ಮಾಷ್ಟಮಿ’ ದಿನದ ಅಂಗವಾಗಿ ಸೆಪ್ಟೆಂಬರ್ 7ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ’ಯನ್ನು ಈ ನಾಡಿನ ಚಿಣ್ಣರಿಗೆ ಹಮ್ಮಿಕೊಂಡಿದ್ದಾರೆ.

ಈ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 3 ವರ್ಷದೊಳಗಿನ ಹಾಗೂ 3 ವರ್ಷ ಮೇಲ್ಪಟ್ಟು 6 ವರ್ಷದೊಳಗಿನ ಮಕ್ಕಳಿಗೆ ಸಂಸ್ಥೆಯ ನಿಯಮಗಳಿಗನುಗುಣವಾಗಿ ಪ್ರಥಮ 7,000/-, ದ್ವಿತೀಯ 5,000/-, ತೃತೀಯ 3,000/-ಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ.. ಭಾಗವಹಿಸುವ ಪ್ರತಿ ಮಗುವಿಗೂ ಸಹ ಪ್ರಶಂಸನಾ ಪತ್ರದೊಂದಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಸಂಕಲ್ಪವನ್ನು ಮಾಡಿರುತ್ತಾರೆ. ನಮ್ಮ ಈ ನಾಡಿನ ಸಮಸ್ತ ಜನತೆಯು ಈ ಭಗವಂತನ ಲೀಲೆಗಳನ್ನು ಪ್ರಚುರಪಡಿಸುವ “ಈ ನಮ್ಮ ಎಕ್ಸಲೆಂಟ್ ಆವರಣದ ವೇದಿಕೆಯ ಚಿಣ್ಣರ ಅಂಗಳಕ್ಕೆ ಆಗಮಿಸುವಂತೆ ಆತ್ಮೀಯ ಕರೆಯೋಲೆಯನ್ನು ನೀಡುತ್ತಿದ್ದೇವೆ ಬನ್ನಿ ನಿಮ್ಮ ಮಕ್ಕಳೊಂದಿಗೆ ಈ ಸುಂದರ ಕಾರ್ಯಕ್ರಮವನ್ನು ಚಂದಗಾಣಿಸಿ” ಎನ್ನುವ ಆಶಯಗಳೊಂದಿಗೆ, ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿ ವರ್ಗದವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು & ಹೈಸ್ಕೂಲ್ ಸುಣ್ಣಾರಿ, ಕುಂದಾಪುರ ತಿಳಿಸಿದ್ದಾರೆ

 

Related Articles

error: Content is protected !!