78
ಉಡುಪಿ : ಮಳೆ ಕಾರಣಕೋಸ್ಕರ ಬಹುದಿನಗಳಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಕಾಂಕ್ರೆಟೀಕರಣ ವಿಳಂಬವಾಗುತ್ತಿದ್ದು. ಇದೀಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಸಮಕ್ಷಮ ಇಂದ್ರಾಳಿ ಮೇಲ್ಸೇತುವೆ ಕಾಂಕ್ರೆಟೀಕರಣ ಮಾಡುವ ಕೆಲಸ ಆರಂಭವಾಗಿದೆ
ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಕೋಟ ಮದ್ಯದಲ್ಲಿ ಮಳೆಯ ವಿಪರೀತವಾಗಿ ಬಾರದಿದ್ದಲ್ಲಿ ಇನ್ನೂ10 ರಿಂದ 12 ದಿನಗಳಲ್ಲಿ ಕಾಂಕ್ರೀಟಿಕರಣ ಮುಗಿಯುತ್ತದೆ ನಂತರ ಕನಿಷ್ಠ 25 ದಿವಸಗಳ ಅವಧಿಯಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಮುಗಿಯಲು ಬೇಕಾಗುತ್ತದೆ ಆದ್ದರಿಂದ ಕಾಮಗಾರಿ ಮುಗಿಯುತ್ತಲೆ ರಸ್ತೆ ಸರಿಯಾಬಹುದು ಎಂದು ನಿರೀಕ್ಷೆಯಲ್ಲಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು ಸಂಸದರೊಂದಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಶ್ರೀ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

