ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸತತ 24ಗಂಟೆಗಳ ಸರಣಿ ಕಾರ್ಯಕ್ರವು ಕಲಾಮಂದಿರ ,ಬೋರ್ಡ್ ಹೈಸ್ಕೊಲ್ ಕುಂದಾಪುರದಲ್ಲಿ ಆಯೋಜಿಸಲಾಗಿದ್ದು.ಇಂದು ನವೆಂಬರ್ 01 ಸಂಜೆ 6.00ಕ್ಕೆ ಆರಂಭವಾಗಿ ನವೆಂಬರ್ 02 ಭಾನುವಾರ ಸಂಜೆ 6.00 ಗಂಟೆಯವರೆಗೆ ನಡೆಯಲ್ಲಿದೆ.
ಇಂದಿನ ಕಾರ್ಯಕ್ರಮಗಳ ವಿವರ:
ಸಂಜೆ 5.00ಕ್ಕೆ ಭಕ್ತಿ ಸಂಗೀತ ನಂತರ ಸಂಜೆ 6.00 ಕ್ಕೆ ಶ್ರೀ.ದಿನೇಶ್ ಹೆಗ್ಡೆ ಮೊಳಹಳ್ಳಿ ಅವರ ಸಭಾಧ್ಯಕ್ಷತೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲ್ಲಿದ್ದಾರೆ ಮಖ್ಯ ಅತಿಥಿಯಾಗಿ ಶ್ರೀ.ಕೆ.ಜಯಪ್ರಕಾಶ ಹೆಗ್ಡೆ ಮಾಜಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಅತಿಥಿಗಳಾಗಿ ಶ್ರೀ ರಾಜೇಶ್ ಕಾರಂತ್ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಶ್ರೀ ಆದರ್ಶ ಶೆಟ್ಟಿ ಹಾಲಾಡಿ ಗೋಲ್ಡನ್ ಪೋರ್ಕ್ ಹಾಸ್ಪಟಾಲಿಟಿ ಮುಂಬೈ ಇವರು ಆಗಮಿಸಲ್ಲಿದ್ದಾರೆ.ರಾತ್ರಿ 7.00ಕ್ಕೆ ಮಳೆ ನಿಂತು ಹೋದ ಮೇಲೆ ಜಯಂತ್ ಕಾಯ್ಕಿಣಿ ಯವರ ಹಾಡುಗಳ ಮಳೆ ಹಾಗೂ ರಾತ್ರಿ 9.30ಕ್ಕೆ ಶ್ರೀ ಮಂಜುನಾಥ ಕುಂದೇಶ್ವರ ಹಾಸ್ಯ ಕಲಾವಿದ ಅವರಿಂದ ಮಿಮಿಕ್ರಿ ಹಾಗೂ ರಾತ್ರಿ 10.00ಕ್ಕೆ ಶ್ರೀ ರಾಮಾಂಜನೇಯ ಮತ್ತು ನಾಗಶ್ರೀ ಯಕ್ಷಗಾನ ಪ್ರಸಂಗ ನಡೆಯಲ್ಲಿದೆ.

