Home » ಕುಂದಾಪುರ ವಿ ಎಸ್‌ ಎಸ್‌ ಎಸ್‌ನಿಂದ ವನಮಹೋತ್ಸವ
 

ಕುಂದಾಪುರ ವಿ ಎಸ್‌ ಎಸ್‌ ಎಸ್‌ನಿಂದ ವನಮಹೋತ್ಸವ

by Kundapur Xpress
Spread the love

 ಕುಂದಾಪುರ : ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಇದರ ವತಿಯಿಂದ ವನಮಹೋತ್ಸವವನ್ನು ಆಚರಿಸಲಾಯಿತು

ಅಂತರಾಷ್ಟ್ರೀಯ ಸಹಕಾರ ವರ್ಷ 2025 ನ್ನು ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತದೆ. ಎಂಬ ಧ್ಯೇಯ ವಾಕ್ಯದೊಂದಿಗೆ  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಉಡುಪಿ. ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವರು ಸಂಯುಕ್ತ ಆಶ್ರಯದಲ್ಲಿ

ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ವಠಾರದಲ್ಲಿ ಪರಿಸರ ಸ್ವಚ್ಚತೆ ಮತ್ತು ತಾಯಿಯ ನೆನಪಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿಯವರು ಚಾಲನೆ ನೀಡಿದರು

ಕಾರ್ಯಕ್ರಮದಲ್ಲಿ  ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪರಿವೀಕ್ಷಣಾ ಅಧಿಕಾರಿ ಸಂದೀಪ್ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ಹೊಳ್ಳ ಕೆ , ನಿರ್ದೇಶಕರು. ಸಿಬ್ಬಂದಿಗಳು ಉಪಸ್ಥಿತರಿದ್ದರು

 

Related Articles

error: Content is protected !!