12
ಕುಂದಾಪುರ : ಶ್ರೀ ರಾಮ್ ಫೌಂಡೇಷನ್ (ರಿ.) ಕುಂದಾಪುರ ಇದರ ವಾರ್ಷಿಕ ಮಹಾಸಭೆ ಮಂಗಳವಾರ ಜೆ. ಸಿ ಭವನ ಕುಂದಾಪುರದಲ್ಲಿ ಕೆ.ಎಚ್ . ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2026-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಬಾಣ ಖಜಾಂಜಿಯಾಗಿ ಶ್ರೀನಿವಾಸ ಇಂಜಿನಿಯರ್ ಮತ್ತು ನಿಯೋಜಿತ ಅಧ್ಯಕ್ಷರಾಗಿ ಕೆ.ವಿ ಭಾಸ್ಕರ್ ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ರಾಧಾಕೃಷ್ಣ ಯು ಮತ್ತು ಮಂಜುನಾಥ್ ಉಪ್ಪಿನಕುದ್ರು ಉಪಸ್ತಿತರಿದ್ದರು.

