Home » ತ್ರಿಶಾ: ವಿದ್ಯಾ ವಿನಾಯಕ ಮಹೋತ್ಸವ ಸಂಪನ್ನ.
 

ತ್ರಿಶಾ: ವಿದ್ಯಾ ವಿನಾಯಕ ಮಹೋತ್ಸವ ಸಂಪನ್ನ.

by Kundapur Xpress
Spread the love

ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಐದನೇ ವರ್ಷದ ವಿದ್ಯಾ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ಆಗಸ್ಟ್ 27ರಂದು ಬೆಳಗ್ಗೆ ಗಣ ಹೋಮ ಮತ್ತು ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಭಜನಾ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು ಆಗಸ್ಟ್ 28 ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸುಧೀರ್ ರಾಜ್ ಅವರು ಚಿಂತನ ಮಂಥನ ಕಾರ್ಯಕ್ರಮದ ಅತಿಥಿಯಾಗಿದ್ದರು. ತ್ರಿಶಾ ವಿದ್ಯಾ ಕಾಲೇಜು ಮತ್ತು ತ್ರಿಶಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಮಾರು 15,33,500 ವರೆಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನದಂದು ವಿಸರ್ಜನಾ ಸಂದರ್ಭದಲ್ಲಿ ಮಹಾಪೂಜೆಯೊಂದಿಗೆ ಅಷ್ಟಾವಧಾನ ಸೇವೆ ಶಂಖ ಜಾಗಟೆ ಗಂಟಾನಾದ , ನೃತ್ಯ, ವೇದ ಘೋಷ, ಅಷ್ಠಕವನ್ನ ಗಣೇಶನಿಗೆ ಸಲ್ಲಿಸಲಾಯಿತು. ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿ.ಎ ಗೋಪಾಲಕೃಷ್ಣ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಎಸ್. ವಿ. ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಸತ್ಯೇಂದ್ರ ಪೈ, ಎಸ್. ವಿ. ಎಸ್ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು , ಊರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Related Articles

error: Content is protected !!