Home » ಬಗಳಾಂಬ ತಾಯಿ ದೇಗುಲ : ಇಂದು ಅನ್ನಸಂತರ್ಪಣೆ
 

ಬಗಳಾಂಬ ತಾಯಿ ದೇಗುಲ : ಇಂದು ಅನ್ನಸಂತರ್ಪಣೆ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬಾ ತಾಯಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನ್ನ ಸಂತರ್ಪಣೆ ಜರುಗಲಿದೆ

ನಿನ್ನೆ ಫೆ.06 ರಂದು ದೇಗುಲದ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಪತಿಯಾಗ ಗುರು ಸನ್ನಿಧಿಯಲ್ಲಿ ಕಲಾವೃದ್ಧಿಹೋಮ ನವಕ ಪ್ರಧಾನ ಕಲಶಾಭಿಷೇಕ ಸಪರಿವಾರ  ದೇವರಾದ ಕಾಲಭೈರವೇಶ್ವರ, ಶ್ರೀ ಆಂಜನೇಯ, ಶ್ರೀ ನಾಗ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಸಂಜೆ ಸ್ಥಾನ ಶುದ್ದಿ, ಪ್ರಾಸಾದ ಶುದ್ಧಿ, ವಾಸ್ತುಪೂಜೆ, ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಅಧಿವಾಸ ಹೋಮ ನಡೆಯಿತು

ಇಂದು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪುಣ್ಯಾಹ ಬ್ರಹ್ಮಕಲಶಾಭಿಷೇಕ ಸಾಮೂಹಿಕ ‘ಚಂಡಿಕಾಯಾಗ ಪೂರ್ಣಾಹುತಿ ಪಲ್ಲಪೂಜೆ ಮಧ್ಯಾಹ್ನ ಮಹಾಪೂಜೆ ಹಾಗೂ ಸೇವಾಕರ್ತರಿಂದ ಅನ್ನಸಂತರ್ಪಣೆ ನಡೆಯಲಿದೆ

ಸಂಜೆ ಶ್ರೀ ಮಾಸ್ತಿಯಮ್ಮ ಭಜನ ಮಂಡಳಿ-ಮದ್ದುಗುಡ್ಡೆ ಇವರಿಂದ ಭಜನ ಕಾರ್ಯಕ್ರಮ ರಾತ್ರಿ ಹೂವಿನ ಪೂಜೆ, ವಿಶೇಷ ರಂಗಪೂಜೆ ನಡೆಯಲಿರುವುದು. ಹಾಗೂ ರಾತ್ರಿ ಗಂಟೆ 9.00ಕ್ಕೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ,ಸೌಕೂರು ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇಗುಲದ ಧರ್ಮದರ್ಶಿಗಳಾದ ಗಣಪತಿ ಸುವರ್ಣ ತಿಳಿಸಿದ್ದಾರೆ

 

Related Articles

error: Content is protected !!