163
ಬೆಂಗಳೂರು ದಕ್ಷಿಣ : ಸಫಾರಿಗೆ ಆಗಮಿಸಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಸುಹಾಸ್ (13 ) ದಾಳಿಗೆ ಒಳಗಾದ ಬಾಲಕ. ಸುಹಾಸ್ ಜೀಪಿನಲ್ಲಿ ಸಫಾರಿಗೆ ಹೋದಾಗ ಕಿಟಕಿ ಬಳಿ ಕೈಯಿರಿಸಿಕೊಂಡಿದ್ದ. ಈ ವೇಳೆ ವಾಹನವನ್ನು ಹಿಂಬಾಲಿಸಿದ ಚಿರತೆಯು ಬಾಲಕನ ಕೈಗೆ ಉಗುರಿನಿಂದ ಪರಚಿದ್ದು, ಮಾಂಸ ಕಿತ್ತು ಬಂದಿದೆ.

