261
ಶ್ರೀ ಮೈಲಾರೇಶ್ವರ ಯುವಕ ಮಂಡಲ
ಇಂದು ಕ್ರೀಡಾಕೂಟ
ಕುಂದಾಪುರ: ಸ್ಥಳೀಯ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 2.00ಗಂಟೆಗೆ ಮೈಲಾರೇಶ್ವರ ಬಯಲು ಮಂಟಪದಲ್ಲಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಫರ್ಧೆ ನಡೆಯಲಿದೆ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಮ್ಯೂಸಿಕಲ್ ಚೆಯರ್,ಹಗ್ಗಜಗ್ಗಾಟ,ಥ್ರೋಬಾಲ್,ಗುಂಡು ಎಸೆತ ಹಾಗೂ ಲೆಮನ್ ಸ್ಪೂನ್ ರೇಸ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ .ಯುವಕರಿಗೆ ಗುಂಡು ಎಸೆತ ಹಾಗೂ ಮೊಸರು ಕುಡಿಕೆ ಓಡೆಯುವ ಸ್ಪರ್ಧೆ ಇದೆ . ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ ಸ್ಫರ್ಧೆ ಯಲ್ಲಿ ಭಾಗವಹಿಸುವವರು ಥ್ರೋಬಾಲ್ಗೆ 9ಜನ ಹಾಗೂ ಹಗ್ಗಜಗ್ಗಾಟಕ್ಕೆ 10ಜನರ ತಂಡವನ್ನು ತಾವೇ ರಚಿಸಿಕೊಂಡು ಹೆಸರು ನೊಂದಾಯಿಸಿಕೊಳ್ಳಬೇಕೆಂದು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ

