Home » ರಾತ್ರೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಎಗರಿಸಿದ ವಂಚಕರು
 

ರಾತ್ರೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಎಗರಿಸಿದ ವಂಚಕರು

by Kundapur Xpress
Spread the love

ಕುಂದಾಪುರ: ರಾತ್ರೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಸೈಬರ್ ವಂಚಕರು ಹಣ ಎಗರಿಸಿದ ಘಟನೆ ನಡೆದಿದೆ.ತೆಕ್ಕಟ್ಟೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪದ ರಮೇಶ್ ಮರಕಾಲ ಅವರ ಖಾತೆಯಿಂದ ಮಧ್ಯರಾತ್ರಿ 12.23ರ ಸುಮಾರಿಗೆ ಐಎಂಪಿಎಸ್ ಮೂಲಕ ಯೂನಿಯನ್ ಬ್ಯಾಂಕ್ ಖಾತೆಯಿಂದ 90 ಸಾವಿರ ರೂ. ಹಣ ಡ್ರಾ ಆಗಿದೆ.

ಯಾವುದೇ ಒಟಿಪಿ ವಿನಂತಿ ಇಲ್ಲ, ಯಾವುದೇ ಅನಧಿಕೃತ ಆ್ಯಪ್ ಡೌನ್ ಲೋಡ್ ಮಾಡಿಲ್ಲ. ನಿದ್ದೆಯಲ್ಲಿದ್ದ ವೇಳೆ, ಮೊಬೈಲ್ ಉಪಯೋಗ ಕೂಡ ಮಾಡದೇ ಇದ್ದ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಆಗಿದ್ದು ಗಾಬರಿಗೊಂಡ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

Related Articles

error: Content is protected !!