Home » 14 ವರ್ಷದ ಬಾಲಕ ಆತ್ಮಹತ್ಯೆ
 

14 ವರ್ಷದ ಬಾಲಕ ಆತ್ಮಹತ್ಯೆ

by Kundapur Xpress
Spread the love

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕ ಲೋಕೇಶ್ ಅವರ ಪುತ್ರ ಗಗನ್ 14 ವರ್ಷ ಬಾಲಕ ಗಗನ್ ಎಂದಿನಂತೆ ಶಾಲೆಗೆ ತೆರಳಿ, ಗುರುವಾರ ಸಂಜೆ ಮನೆಗೆ ವಾಪಸಾಗಿದ್ದ. ಮನೆಗೆ ಬಂದ ನಂತರ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!