Home » ಯುವ ಕಲಾವಿದ ರಂಜಿತ ಬನ್ನಾಡಿ ವಿದ್ಯುತ್ ಆಘಾತಕ್ಕೆ ಬಲಿ
 

ಯುವ ಕಲಾವಿದ ರಂಜಿತ ಬನ್ನಾಡಿ ವಿದ್ಯುತ್ ಆಘಾತಕ್ಕೆ ಬಲಿ

ಸೂರಲು ಯಕ್ಷಗಾನ ಮೇಳದ ಯುವ ಕಲಾವಿದ

by Kundapur Xpress
Spread the love

ಕೋಟ : ಸೂರಾಲು ಯಕ್ಷಗಾನ ಮೇಳದ ಯುವ ಕಲಾವಿದ ರಂಜಿತ ಬನ್ನಾಡಿ ವಿದ್ಯುತ್ ಅಘಾತದಿಂದ ಸಾವನ್ನಪ್ಪಿದ ಘಟನೆ ಮೇ. 13 ರಂದು ರಾತ್ರಿ ಆಗುಂಬೆಯಲ್ಲಿ ಸಂಭವಿಸಿದೆ.

ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನ ಮಳೆಯಿಂದ ರದ್ದಾದ ಕಾರಣ ಯುವ ಕಲಾವಿದ ತನ್ನ ದ್ವಿಚಕ್ರ ವಾಹನದಲ್ಲಿ ವಾಪಸು ಮನೆಗೆ ಬರುತ್ತಿದ್ದ ವೇಳೆ ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ಯುವ ಕಲಾವಿದ ರಂಜಿತ ಬನ್ನಾಡಿ ಅವರ ಮೇಲೆ ವಿದ್ಯುತ್ ತಂತಿ ಹರಿದು ತೀವ್ರವಾಗಿ ಗಾಯಗೊಂಡಿದ್ದರು

ಕೂಡಲೇ ಸ್ಥಳಿಯರ ಸಹಕಾರದಿಂದ ತುರ್ತುವಾಹನದ ಮೂಲಕ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.

ಸಹ ಸವಾರ ಸ್ರೀ ವೇಷಧಾರಿ ವಿನೋಧ ರಾಜ್ ಅದೃಷ್ಷವಷಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

 

Related Articles

error: Content is protected !!