Home » ಸುವರ್ಣ ಮಹೋತ್ಸವ ಅರ್ಥಪೂರ್ಣಗೊಳಿಸುವ -ಆನಂದ್ ಸಿ ಕುಂದರ್
 

ಸುವರ್ಣ ಮಹೋತ್ಸವ ಅರ್ಥಪೂರ್ಣಗೊಳಿಸುವ -ಆನಂದ್ ಸಿ ಕುಂದರ್

ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಭ್ರಮ ಆಮಂತ್ರಣ ಬಿಡುಗಡೆ

by Kundapur Xpress
Spread the love

ಕೋಟ : ಕೋಟದ ದೊಡ್ಡ ಗಣೇಶ ಸಾಕಷ್ಟು ಹಿರಿತನದ ಗಣೇಶೋತ್ಸವವಾಗಿದ್ದು ,ಸುವರ್ಣ ಮಹೋತ್ಸವದ ಗಣೇಶೋತ್ಸವವನ್ನು ಅರ್ಥಪೂರ್ಣಗೊಳಿಸಲು ಪ್ರತಿಯೊಬ್ಬರು ಶ್ರಮಿಸುವಂತ್ತಾಗಲಿ ಎಂದು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಕರೆ ನೀಡಿದರು.

ಭಾನುವಾರ ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಇದೇ ಬರುವ ಅಗಸ್ಟ್ 27ರಿಂದ ಸೆ.04ರ ತನಕ ಕೋಟದ ಅಮೃತೇಶ್ವರೀ ಸಭಾಂಗಣದಲ್ಲಿ ನಡೆಯಲಿರುವ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಪ್ರಸ್ತುತ ಗಣೇಶೋತ್ಸವವು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಗಣೇಶೋತ್ಸವ ವೇದಿಕೆ ಕಲ್ಪಿಸಲಿದೆ ಅಲ್ಲದೆ ಪರಿಸರಸ್ನೇಹಿ ಸುವರ್ಣ ಸಂಭ್ರಮವನ್ನಾಗಿಸಲಿದೆ ಎಂದರು.

ಇದೇ ವೇಳೆ ಗಣ್ಯರ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಜೋಗಿ,ಕಾರ್ಯದರ್ಶಿ ಚಂದ್ರ ಆಚಾರ್,ಕೋಶಾಧಿಕಾರಿ ಶೀಲರಾಜ್ ಕಾಂಚನ್,ಉಪಾಧ್ಯಕ್ಷರಾದ ದೇವೇಂದ್ರ ಗಾಣಿಗ,ಜತೆ ಕಾರ್ಯದರ್ಶಿ ದೇವದಾಸ್ ಕಾಂಚನ್,ಉಮೇಶ್ ಪೂಜಾರಿ,ಸಲಹಾ ಸಮಿತಿಯ ಚಂದ್ರ ಪೂಜಾರಿ,ಅಮೃತ್ ಜೋಗಿ ,ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು

 

Related Articles

error: Content is protected !!