57
ಕುಂದಾಪುರ : ವಿಧಾನಸಭಾ ಕ್ಷೇತ್ರದವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಇಂದು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ವಿಕಲಚೇತನರಿಗೆ ಕುಂದಾಪುರ ತಾಲೂಕು ಪಂಚಾಯತ್ ಸಂಕೀರ್ಣದ ಆವರಣದಲ್ಲಿ ಕೃತಕ ಕಾಲನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶ್ರೀಮತಿ ರತ್ನ,ಪಿ.ಎನ್.ಒ ಡೆನಿಸ ಡಿಸಿಲ್ವಾ, ಎಂ ಆರ್ ಡಬ್ಲ್ಯೂ ಮಂಜುನಾಥ್ ಹೆಬ್ಬಾರ್, ಕಚೇರಿ ಸಹಾಯಕ ಪ್ರದೀಪ್ ಹಾಗೂ ಸುಕನ್ಯ ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ.ಕೆ. ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

