ಕುಂದಾಪುರ : ಕುಂದಾಪುರ ರೈಲ್ವೆ ಸ್ಟೇಷನ್ ನಲ್ಲಿ ನವೀಕರಣಗೊಂಡ ಫ್ಲಾಟ್ ಫಾರ್ಮ್ ಮತ್ತು ನೂತನ ಛಾವಣಿ ಹಾಗೂ ಗಾರ್ಡನಿನ ಸುಂದರಿಕರಣದ ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು ಕುಂದಾಪುರ
ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಗ್ಲೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೋಹನ್.ಡಿ.ಕ್ರಾಸ್ತ, ವಹಿಸಿದ್ದರು.
ವೇದಿಕೆಯಲ್ಲಿ ಲಯನ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಗಣೇಶ್ ಪುತ್ರನ್, ಉದ್ಯಮಿ ರಾಜೀವ ಕೋಟ್ಯಾನ್, ಬಿ ಅರುಣ್ ಕುಮಾರ್ ಹೆಗ್ಡೆ ಲಯನ್ಸ್ ಜಿಲ್ಲಾ ಅಂಬಾಸಿಡರ್, ಸ್ವಪ್ನ ಸುರೇಶ್ ಜಿಲ್ಲಾ ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲರು ಜಿಲ್ಲೆ 317ಸಿ, ಹರಿಪ್ರಸಾದ್ ರೈ ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲರು ಎಲೆಕ್ಟ್,2025-26 ಜಿಲ್ಲೆ 317ಸಿ, ಬಿ. ಸೋಮನಾಥ ಹೆಗ್ಡೆ ರಿಜನ ಚೇರ್ಮನ್, ಶ್ರೀಮತಿ ಅನುಪಮಾ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಂದಾವರ, ಹಾಗೂ ಹಾಗೂ ಲಯನ್ಸ್ ಪದಾಧಿಕಾರಿಗಳು, ರೈಲ್ವೆ ನಾಗರಿಕ ಹಿತ ರಕ್ಷಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

