ಕುಂದಾಪುರ : ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಹಾಸಭೆಯು ಕುಂದಾಪುರ ನಗರದ ಮೊಗವೀರ ಭವನದಲ್ಲಿ ದಿನಾಂಕ 15.09.2024ರ ರವಿವಾರ ಜರುಗಿತು ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವರದಿ ಸಾಲಿನಲ್ಲಿ ರೂ. 32059.74 ಲಕ್ಷಕ್ಕೂ ಮಿಕ್ಕಿದ ವ್ಯವಹಾರ ನಡೆಸಿ, ರೂ.179.28 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಸಂಘವು ವರದಿ ಸಾಲಿನಲ್ಲಿ ರೂ. 6,942.64 ಲಕ್ಷ ಠೇವಣಿ ಹೊಂದಿದ್ದು ಸದಸ್ಯರಿಗೆ ರೂ. 5,638..25 ಲಕ್ಷ ಸಾಲ ನೀಡಿದೆ ಎಂದು ತಿಳಿಸಿದರು.
ಮಹಾಸಭೆಯ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ಉಪ ನಿಬಂಧಕರಾಗಿ ನಿವೃತ್ತಿ ಹೊಂದಿದ ಎಸ್ ವಿ ಅರುಣ್ ಕುಮಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು
ಪ್ರತಿಭಾನ್ವಿತ 27 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 1,07.000ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವಾರ್ಷೀಕ ಮಹಾಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಬಿ ರಾಧಾಕೃಷ್ಣ ನಾಯಕ್ ಹಾಗೂ ಸದಸ್ಯರಾದ ಅಶೋಕ್ ಬೆಟ್ಟಿನ್ ಜಿ.ಆರ್.ಪ್ರಕಾಶ್ ಅಜೇಯ್ ಹವಲ್ದಾರ್ ಶ್ರೀ ಮಂಜುನಾಥ ಮದ್ದೋಡಿ, ಗೋಪಾಲಕೃಷ್ಣ, ರವೀಂದ್ರ ಕಾವೇರಿ, ಶ್ರೀಧರ ಪಿ.ಎಸ್. ಕೆ.ರಾಮಾನಾಥ್ ನಾಯ್ಕ, ಕೆ ಎಚ್ ಚಂದ್ರಶೇಖರ್ ಎನ್ ವಿ ದಿನೇಶ್ ಶ್ರೀಮತಿ ಪಿ ದೇವಕಿ ,ಶ್ರೀಮತಿ ಡಿ.ಕೆ ಲಕ್ಷ್ಮಿ ಪ್ರಭಾಕರ್, ಡಿ ಸದಾಶಿವ್ ಎಮ್.ಜಿ ರಾಜೇಶ್, ಕರುಣಾಕರ ರಾವ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಬಿ ಉಪಸ್ಥಿತರಿದ್ದರು.ರಾಘವೇಂದ್ರ ಬಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಸ್ವಾಗತಿಸಿ ಶ್ರೀಮತಿ ಡಿ.ಕೆ ಲಕ್ಷ್ಮಿ ಪ್ರಭಾಕರ್ ಪ್ರಾರ್ಥಿಸಿ ಅಶೋಕ್ ಬೆಟ್ಟಿನ್ ವಂದಿಸಿ ಶ್ರೀಧರ್ ಪಿ ಎಸ್ ಸನ್ಮಾನ ಪತ್ರ ಓದಿದರು.

