Home » ನವರಾತ್ರಿ ಪೂಜೆಯ ಸಂಭ್ರಮ : ಮನೆ ಮಾಲೀಕ ನೇಣು ಬಿಗಿದು ಆತ್ಮಹತ್ಯೆ
 

ನವರಾತ್ರಿ ಪೂಜೆಯ ಸಂಭ್ರಮ : ಮನೆ ಮಾಲೀಕ ನೇಣು ಬಿಗಿದು ಆತ್ಮಹತ್ಯೆ

by Kundapur Xpress
Spread the love

ಮನೆಯಲ್ಲಿ ಎಲ್ಲರೂ ನವರಾತ್ರಿ ಪೂಜೆಯ ಸಂಭ್ರಮದಲ್ಲಿದ್ದ ವೇಳೆ ಮನೆ ಮಾಲೀಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಂದಳಿಕೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಸಂತೋಷ ಆಚಾರ್ಯ ಎಂದು ಗುರ್ತಿಸಲಾಗಿದ್ದು, ಪ್ರತಿವರ್ಷದಂತೆ ಮನೆಯಲ್ಲಿ ನವರಾತ್ರಿ ಪೂಜೆಯಲ್ಲಿ ಕುಳಿತುಕೊಳ್ಳಬೇಕಿದ್ದ ಮೃತ ಸಂತೋಷ್ ರವರು ಮದ್ಯಪಾನ ಮಾಡಿದ್ದ ಕಾರಣ ಅವರ ಅಣ್ಣನ ಮಗನನ್ನು ಪೂಜೆಗೆ ಕುಳ್ಳಿರಿಸಲಾಯಿತು. ಪೂಜೆ ಬಳಿಕ ಸಂಜೆ ವೇಳೆ ಎಲ್ಲರೂ ಅವರವರ ಕೆಲಸದಲ್ಲಿದ್ದ ವೇಳೆ ಸಂತೋಷ್ ರವರು ಏಕಾಏಕಿ ಮನೆಯೊಳಗೆ ಹೋಗಿ, ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಮೃತರ ಪತ್ನಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Related Articles

error: Content is protected !!