113
ಕುಂದಾಪುರ : ಶಂಕರನಾರಾಯಣ ಪೊಲೀಸ್ ಠಾnಅ ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಮರಳು ಕಳವು ಮಾಡಿ ಸಾಗಾಟ ಯತ್ನಿಸುತ್ತಿದ್ದ 3 ಟಿಪ್ಪರ್ ಲಾರಿಗಳನ್ನು ಶಂಕರನಾರಾಯಣ ಪಿಎಸ್ಐ ಯೂನಸ್ ಆರ್.ಗಡೇಕರ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅವರು 3 ಟಿಪ್ಪರ್ ಲಾರಿ ಹಾಗೂ 9 ಯೂನಿಟ್ ಮರಳು ಸ್ವಾಧೀ ನಪಡಿಸಿಕೊಂಡಿದ್ದಾರೆ. ಮರಳು ಕಳವುಗೈದ ಆರೋಪದಡಿ ಚರಣ, ಮಹೇಶ್, ಸುಧೀರ ಎಂಬವರ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

