Home » ಸುಹಾಸ್ ಹತ್ಯೆ : ಆರೋಪಿ ಹಾಸನದಲ್ಲಿ ಅರೆಸ್ಟ್
 

ಸುಹಾಸ್ ಹತ್ಯೆ : ಆರೋಪಿ ಹಾಸನದಲ್ಲಿ ಅರೆಸ್ಟ್

by Kundapur Xpress
Spread the love

ಮಂಗಳೂರು : ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ.

ಹಾಸನ ನಗರದ ಸಂಪಿಗೆ ರಸ್ತೆಯಲ್ಲಿ ಹೋಟೇಲ್‌ ನಡೆಸುತ್ತಿದ್ದ ನೌಷಾದ್ ಯಾನೆ ಚೊಟ್ಟೆ (39 ವರ್ಷ) ಬಂಧಿತ ಆರೋಪಿ. ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಕುಂಪನಮಜಲು ನಿವಾಸಿ ನೌಷಾದ್ ಹಾಸನ ನಗರದ ಕೆ.ಆರ್.ಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸುಹಾಸ್‌ಶೆಟ್ಟಿ ಕೊಲೆಗೆ ಸಂಚು ರೂಪಿಸಲು ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಆತನ್ನು ಬಂಧಿಸಲಾಗಿದೆ.

 

Related Articles

error: Content is protected !!