Home » ಚಿನ್ನದ ಸರ ಎಗರಿಸಿ ಪರಾರಿ
 

ಚಿನ್ನದ ಸರ ಎಗರಿಸಿ ಪರಾರಿ

by Kundapur Xpress
Spread the love

ಮಣಿಪಾಲ : ನಗರದ ಸಮೀಪದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಹಿಂಬಾಲಿಸಿ 45 ಗ್ರಾಂ ಚಿನ್ನವನ್ನು ಸುಲಿಗೆ ಮಾಡಿದ ಘಟನೆ ಸಂಭವಿಸಿದೆ.

ಕೆಎಂಸಿ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದ ಅಟೆಂಡರ್ ಹೆರ್ಗಾ ನಿವಾಸಿ ವಸಂತಿ (51ವರ್ಷ) ಅವರು ದೈನಂದಿನ ಕೆಲಸ ಮುಗಿಸಿ ಸಂಜೆ 5:30 ಮನೆಗೆ ಹೋಗುತ್ತಿದ್ದಾಗ WGSHA ಕಾಲೇಜಿನ ಹಿಂಬದಿ ಓರ್ವ ವ್ಯಕ್ತಿ ಬಂದು ವಸಂತಿ ಅವರ ಕುತ್ತಿಗೆಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 3,50,000ರೂ ಮೌಲ್ಯದ ಸುಮಾರು 45 ಗ್ರಾಂ ತೂಕದ ಚಿನ್ನದ ಚೈನ್ ನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!