82
ಅಯೋಧ್ಯೆ : ರಾಮಮಂದಿರದಲ್ಲಿ ಮತ್ತೊಮ್ಮೆ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಜರುಗಲಿದೆ. ಜೂನ್ನಲ್ಲಿ ಒದಗುವ ಶುಭ ಮುಹೂರ್ತದಲ್ಲಿ 18 ವಿಗ್ರಹಗಳ ಪ್ರಾಣಪ್ರತಿಷ್ಠೆ ಸಂಪನ್ನಗೊಳ್ಳಲಿದೆ. ಅದಕ್ಕೂ ಮುನ್ನ ವಿಗ್ರಹಗಳ ಪ್ರತಿಷ್ಠಾಪನೆ ನಡೆಸಲಾಗುತ್ತದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ಈ ಕುರಿತು ಮಾಹಿತಿ ನೀಡಿದರು. ಅಕ್ಷಯ ತೃತೀಯ ದಿನವಾದ ಏ.30ರಂದು ಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಸ್ಥಾಪಿಸಲಾಗುತ್ತದೆ. ಜನ್ಮಭೂಮಿ ಸಂಕೀರ್ಣದಲ್ಲಿರುವ ಉಳಿದೆಲ್ಲ ಮಂದಿರ-ಗುಡಿಗಳಲ್ಲಿನ ವಿಗ್ರಹಗಳ ಜೊತೆಗೆ ಪ್ರಾಣಪ್ರತಿಷ್ಠೆಯು ಜೂನ್ನಲ್ಲಿ ಸಂಪನ್ನಗೊಳ್ಳಲಿದೆ. ಎಲ್ಲ ವಿಗ್ರಹಗಳ ಬಟ್ಟೆ, ಅಲಂಕಾರಕ್ಕಾಗಿ ಆಭರಣ ಇತ್ಯಾದಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿಗ್ರಹಗಳ ಪ್ರಾಣಪ್ರತಿಷ್ಠೆಗೂ ಎರಡು ದಿನಗಳ ಮೊದಲು ಜಲಾಧಿವಾಸ, ಧಾನ್ಯಾಧಿವಾಸ, ಔಷಧಾಧಿವಾಸ ಮತ್ತು ಶಯ್ಯ ಇತ್ಯಾದಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ಮಾಹಿತಿ ನೀಡಿದರು

