118
ಪ್ರಯಾಗರಾಜ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸೋಮವಾರ ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಕ್ಕೆ ಭೇಟಿ ನೀಡಿ, ಗಂಗಾ, ಯಮುನಾ, ಸರಸ್ವತಿ ನದಿಗಳ ಶ್ರೀವೇಣಿ ಸಂಗಮದಲ್ಲಿ ಪವಿತ್ರ ಸ್ಥಾನ ಮಾಡಿದರು. ಬಳಿಕ ಅವರು ಪ್ರಯಾಗ್ರಾಜ್ನಲ್ಲಿನ ಅಕ್ಷಯ್ ವತ್ ಮತ್ತು ಬಡೇ ಹನುಮಾನ್ ಮಂದಿರಗಳಿಗೂ ಭೇಟಿ ನೀಡಿದರು
ನಂತರ ಡಿಜಿಟಲ್ ಮಹಾಕುಂಭ ಎಕ್ಸಿರಿಯನ್ಸ್ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಉಪಸ್ಥಿತರಿದ್ದರು.

