114
ತಿರುವನಂತಪುರಂ : 13 ಅಪಾಯಕಾರಿ ಸರಕುಗಳು ಸೇರಿದಂತೆ 640 ಕಂಟೇನರ್ಗಳನ್ನು ಹೊತ್ತೊಯ್ಯುತ್ತಿದ್ದ ಲೈಬೀರಿಯನ್ ಸರಕು ಹಡಗು ಕೇರಳ ಕರಾವಳಿಯ ಸಮುದ್ರದಲ್ಲಿ ಮುಳುಗಿದೆ.
ಇದು ಪರಿಸರ ಹಾನಿಯ ಭೀತಿಯನ್ನು ಹೆಚ್ಚಿಸಿದೆ. ಕರಾವಳಿ ಕಾವಲು ಪಡೆ ಹಡಗು ಐಸಿಜಿಎಸ್ ಸಕ್ಷಮ್ ತೈಲ ಸೋರಿಕೆ ನಿಯಂತ್ರಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದೆ. ಹಡಗಿನಲ್ಲಿ 24 ಸಿಬ್ಬಂದಿ ಇದ್ದರು.
ಈ ಪೈಕಿ 21 ಜನರನ್ನು ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಿಸಿದೆ. ಹಡಗು ಮುಳುಗಲು ಪ್ರಾರಂಭಿಸುತ್ತಿದ್ದಂತೆ, ನೌಕಾಪಡೆಯು ಉಳಿದ ಮೂವರನ್ನು ಕ್ಯಾಪ್ಟನ್, ಮುಖ್ಯ ಎಂಜಿನಿಯರ್ ಮತ್ತು ಎರಡನೇ ಎಂಜಿನಿಯರ್ ಭಾನುವಾರ ಬೆಳಗ್ಗೆ ಕಾಪಾಡಲಾಯಿತು.

