91
ಟೊರಂಟೊ : ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಈ ಪೈಕಿ ವಿದೇಶಾಂಗ ಸಚಿವೆಯಾದ ಮೊದಲ ಹಿಂದೂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಅನಿತಾ ಆನಂದ್ ಪಾತ್ರರಾಗಿದ್ದು, ಅವರು ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿ ಗಮನ ಸೆಳೆದರು. ಅನಿತಾ ಆನಂದ್, ಮಣಿಂದರ್ ಸಿಧು, ರಣದೀಪ್ ಸಿಂಗ್ ಸರಾಯ್ ಮತ್ತು ರೂಬಿ ಸಹೋಟಾ ಸಚಿವರಾಗಿ ಆಯ್ಕೆಯಾಗಿದ್ದಾರೆ.

