238
ಇಂದು ಪ್ರತಿಷ್ಠಾಪನಾ ವರ್ಧಂತ್ಯೋತ್ಸವ
ಪಂಡುಮನೆ ಆಗರಕಟ್ಟೆ ಶ್ರೀ ಪ್ರಸನ್ನಃ ಬೊಬ್ಬರ್ಯ ಹಾಗೂ ಸಪರಿವಾರ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಇಂದು ಜರುಗಲಿದೆ ಬೆಳಿಗ್ಗೆ 10 ಗಂಟೆಗೆ ಪ್ರಸನ್ನಪೂಜೆ, ದುರ್ಗಾಹೋಮ, ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಂದ ಖಾರ್ವಿಕೇರಿಯ ಶ್ರೀ ನಾಗಜಟ್ಟಿಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಸಂಜೆ 7 ರಿಂದ ಕೋಣಿಯ ಮಂಜುಷಾ ಭಜನಾ ಮಂಡಳಿಯವರಿಂದ ಚಂಡೆ ಮತ್ತು ಕುಣಿತ ಭಜನೆ ನಡೆಯಲಿರುವುದು ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನಂಬಿದ ಭಕ್ತರು ಹಾಗೂ ಕುಂದಾಪುರ ಪಂಡುಮನೆ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.

