127
ಕೋಟ : ಇಲ್ಲಿನ ಸಾಲಿಗ್ರಾಮದ ಸಮೀಪ ಗುಂಡ್ಮಿ ವೈದಿಕ ಆಶ್ರಮದಲ್ಲಿ ನಡೆಯುವ ಸಮಗ್ರ ರುದ್ರೆಕಾದಶಿನೀ ಹೋಮದ ಪೂರ್ಣಾಹುತಿ ಕಾರ್ಯಕ್ರಮ ಮಾ.5ರಂದು ನಡೆಯಲಿದ್ದ ಹಿನ್ನಲ್ಲೆಯಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಳ್ಳಲಿದೆ. ಈ ಹಿನ್ನಲ್ಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು,ಮಧ್ಯಾಹ್ನ 11.30ಕ್ಕೆ ಭಕ್ತ ಮಹಾಜನರಿಗೆ ಶ್ರೀಗಳು ಅನುಗ್ರಹ ಆಶೀರ್ವಾದ ಮಾಡಲಿದ್ದು. ಶ್ರೀ ಶಾರದಾ ಚಂದ್ರಮೌಳೀಶ್ವರ ದೇವರ ಸಹಿತರಾಗಿ ದಿವ್ಯ ಪಾದಾರ್ಪಣೆ ಮಾಡುತ್ತಿರುವ ಶ್ರೀ ಶ್ರೀ ಸನ್ನಿಧಾನಂಗಳದಿ ಸಮಸ್ತ ಅಪೇಕ್ಷಿತ ಭಕ್ತರಿಗೆ ಶ್ರೀ ಗುರುಗಳ ಪಾದಪೂಜೆ ಮತ್ತು ಭಿಕ್ಷಾವಂದನೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಮಧ್ಯಾಹ್ನ 1.00ಕ್ಕೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರುಗಲಿದೆ.ಎಂದು ಸಂಘಟಕರು ತಿಳಿಸಿದ್ದಾರೆ.

