153
ಕುಂದಾಪುರ : ಪುಷ್ಪಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲ ಸ್ಥಾನ ಅಭಿವೃದ್ಧಿಗೊಂಡಿದ್ದು ಇಂದು ಜು.15ರಂದು ಬೆಳಗ್ಗೆ 10.30ಕ್ಕೆ ನೂತನ ಶಿಲಾಮಯ ಮೂಲ ಸಾನಿಧ್ಯವು ಲೋಕಾರ್ಪಣೆಗೊಳ್ಳಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಬ್ಲಾಡಿ ಎನ್. ಮಂಜಯ್ಯ ಶೆಟ್ಟಿ ಮತ್ತು ಸೌಕೂರು ಸೇರ್ವೆಗಾರರ ಮನೆತನದ ವಸಂತಿ ಎಂ. ಶೆಟ್ಟಿ ಅವರು ಸುಮಾರು 25 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಈ ದೇವರ ಮೂಲ ಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

