170
ಕುಂದಾಪುರ : ನಗರದ ರಾಮಕ್ಷತ್ರಿಯ ಯುವಕ ಮಂಡಳಿ ವತಿಯಿಂದ ನಡೆಯುವ ಗಣೇಶೋತ್ಸವದ ಷಷ್ಟ್ಯಬ್ಧ ಸಂಭ್ರಮಾಚರಣೆ ಪ್ರಯುಕ್ತ ಆಗಸ್ಟ್ 10ರ ಭಾನುವಾರ ಬೆಳಿಗ್ಗೆ ಜೂನಿಯರ್ ಕಾಲೇಜು ವಠಾರದಲ್ಲಿ ಕ್ರೀಡೋತ್ಸವ ಉದ್ಘಾಟನೆಗೊಳ್ಳಲಿದೆ
ಎಲ್ ಕೆ ಜಿ ಯು ಕೆ ಜಿ ಯಿಂದ ಯುವಕ ಯುವತಿಯರ ವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕ್ರೀಡೋತ್ಸವದಂದು ವಾಲಿಬಾಲ್, ತ್ರೋಬಾಲ್, ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಮಕ್ಕಳಿಗಾಗಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ, ಮಕ್ಕಳಿಗೆ, ಪುರುಷರಿಗೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಮಹಿಳೆಯರಿಗೆ ನಡೆಯಲಿದೆ ಎಂದು ರವಿ ಹೆಗ್ಡೆ ತಿಳಿಸಿದ್ದಾರೆ

