ಹೈದರಾಬಾದ್ : ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಶಾಸಕಿ – ಕೆ. ಕವಿತಾ ಅವರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್ ) ಪಕ್ಷದಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ. ಪಕ್ಷದೊಳಗೆ ಆಂತರಿಕ ಕಲಹ ತೀವ್ರವಾಗಿದೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಹಿಂದಿನ ಬಿಆರ್ಎಸ್ ‘ಆಡಳಿತಾವಧಿಯಲ್ಲಿ ಕೈಗೊಂಡ ಕಾಳೇಶ್ವರಂ ಯೋಜನೆಯಲ್ಲಿನ ಅಕ್ರಮಗಳ ಕುರಿತು ತೆಲಂಗಾಣ ಸರಕಾರ ಇತ್ತೀಚೆಗೆ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಕವಿತಾ ಅವರು “ಈ ಯೋಜನೆ ಕುರಿತು ನನ್ನ ತಂದೆ ಕೆಸಿಆರ್ ಅವರ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ, ಅದಕ್ಕೆಬಿಆರ್ಎಸ್ ನಾಯಕರಾದ ಟಿ. ಹರೀಶ್ ದ ರಾವ್ ಮತ್ತು ಜೆ. ಸಂತೋಷ್ ಕುಮಾರ್ ಅವರೇ ಕಾರಣ. ಇವರಿಬ್ಬರೂ ಸಿಎಂ ರೇವಂತ್ ರೆಡ್ಡಿ ಜತೆ ಒಳ ಒಪ್ಪಂದ ಮಾಡಿಕೊಂಡಿ ದ್ದಾರೆ,” ಎಂದು ಆರೋಪಿಸಿ ದ್ದರು. ಇದು ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿತ್ತು.
ಕವಿತಾ ಅವರ ಮತ್ತು ಪಕ್ಷ ವಿರೋಧಿ ಚಟು ವಟಿಕೆಗಳು ಬಿಆರ್ಎಸ್ಗೆ ಧಕ್ಕೆ “ಇತ್ತೀಚಿನ ದಿನಗಳಲ್ಲಿನ ನಡವಳಿಕೆ గుంటు ಮಾಡಿವೆ. ನಾಯಕತ್ವವು ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾ ನತುಗೊಳಿಸಿದೆ,” ಎಂದು ಬಿಆರ್ಎಸ್ ಪ್ರಧಾನ ಕಾಠ್ಯದರ್ಶಿಗಳಾದ ಟಿ. ರವೀಂದ್ರ ರಾವ್ ಮತ್ತು ಸೋಮ ಭರತ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದರು

