ರಾಷ್ಟ್ರಭಕ್ತಿಯ ಸ್ಪೂರ್ತಿಯ ಸೆಲೆಯೇ ಶಿವಾಜಿ

ಕುಂದಾಪುರ:ಇತಿಹಾಸ ಪ್ರಸಿಧ್ದ ಬಸ್ರೂರನ್ನು ದಚ್ಚರು ಹಾಗೂ ಪೋರ್ಚುಗೀಸರ ವಶದಿಂದ ಬಿಡುಗಡೆಗೊಳಿಸಿ ಅವರ ದಬ್ಬಾಳಿಕೆಯನ್ನು ಹಿಮ್ಮೆಟಿಸಿ ಪುನಃ ಕೆಳದಿ ಸಾಮ್ರಾಜ್ಯದ ಭಾಗವಾಗಿಸಿದ ದಿನವನ್ನು ಬಸ್ರೂರಿನ ಛತ್ರಪತಿ ಶಿವಾಜಿ ಬಳಗವು ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು

ಗಂಗೊಳ್ಳಿಯ ಬಂದರಿನಿಂದ ಹಲವಾರು ದೋಣಿಗಳಲ್ಲಿ ಶಿವಾಜಿಯ ಪ್ರತಿಮೆಯೊಂದಿಗೆ ನೂರಾರು ಶಿವಾಜಿಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನದಿಯ ಮಾರ್ಗವಾಗಿ ಬಸ್ರೂರಿನ ಮಂಡಿಕೇರಿಗೆ ಬಂದು ಅಲ್ಲಿಂದ ಶೋಭಾಯಾತ್ರೆಯ ಮೂಲಕ ಶಿವಾಜಿ ಮೂರ್ತಿಯನ್ನು ಅಮ್ಮನವರ ಶ್ರೀ ದೇವಿ ದೇವಸ್ಥಾನದ ವಠಾರದವರೆಗೆ ಚಂಡೆ ವಾದನ, ಭಜನಾ ತಂಡಗಳು, ಕೀಲು ಕುದುರೆ, ಟ್ಯಾಬ್ಲೋ ಗಳೊಂದಿಗೆ ಸಾಗಿಬಂತು

ದೀಪ ಬೆಳಗುವ ಮುಖಾಂತರ ಶ್ರೀ ಶ್ರೀ ಶ್ರೀ ಸ್ವಾಮಿ ಶ್ರೀಪಾದ ಅವಧೂತ ಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಭಾರತೀಯ ಸಂತ ಸಭಾದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಂದೀಪರಾಜ್ ಮಹಿಂದ್ ಪುಣೆ ಯವರು ಮಾತನಾಡಿ ಶಿವಾಜಿ ಬಸ್ರೂರಿಗೆ ಬಂದ ಇತಿಹಾಸವನ್ನು ತಿಳಿಸಿದರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಸದಸ್ಯರು ಮತ್ತು ಪ್ರಾಧ್ಯಾಪಕರಾದ ಡಾ| ಎಮ್. ಕೊಟ್ರೇಶ್ ರವರು ತಮ್ಮ ಅದ್ಬುತ ವಾಘ್ಜರಿಯ ಮೂಲಕ ಸತ್ಯದ ಇತಿಹಾಸವನ್ನು ನೆನಪಿಸಿದರು ದಿಕ್ಷೂಚಿ ಭಾಷಣಕಾರರಾಗಿ ಆಗಮಿಸಿದ ಕಾರ್ಕಳದ ಲೇಖಕರು ಹಾಗೂ ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿಯವರು ತನ್ನ ಹರಿತದ ಮಾತಿನಿಂದ ನೆರೆದ ಜನಸ್ತೋಮವನ್ನು ಮಂತ್ರ ಮುಗ್ದರನ್ನಾಗಿಸಿದರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೋಕ್ತೇಸರರಾದ ಬಿ ಅಪ್ಪಣ್ಣ ಹೆಗ್ಡೆ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಬಸ್ರೂರು ಸ್ವಾತಂತ್ಯ ದಿನ ಮಹೋತ್ಸವದ ಸಂಚಾಲಕರದ ಸುಧೀರ್ ಮೇರ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿವಾಜಿ ಅಭಿಮಾನಿ ಬಳಗದ ಅಧ್ಯಕ್ಷರಾದ ಉಮೇಶ್ ಆಚಾರ್ ಸ್ವಾಗತಿಸಿ ರಾಕೇಶ್ ಜಿ ಕೆಳಮನೆ ಧನ್ಯವಾದವಿತ್ತರು ಸಾರಿಕ ಅಶೋಕ್ ರವರು ಕಾರ್ಯಕ್ರಮದ ನಿರೂಪಿಸಿದರು ಕೊನೆಯಲ್ಲಿ ವಂದೇ ಮಾತರಂ ಗೀತೆ ಹಾಡಲಾಗಿ ಶಿವಾಜಿ ಕುರಿತಂತೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ರಾ.ಸ್ವ.ಸಂಘದ ಹಿರಿಯರಾದ ಸುಬ್ರಹ್ಮಣ್ಯ ಹೊಳ್ಳ ಗುರುರಾಜ್ ಸತೀಶ್ ಕಾಳಾವರ್ಕರ್ ಭಾರತೀಯ ಮಜ್ದೂರ್ ಸಂಘದ ಗೀರೀಶ್ ಸಸಿಹಿತ್ಲು ಹಾಗೂ ರಾಜೇಶ್ ಕಾವೇರಿ ಉಪಸ್ಥಿತರಿದ್ದರು

