Home ಕರಾವಳಿ ಸುದ್ದಿಕೋಟತಟ್ಟು ಪಡುಕರೆ ಗದ್ದೆ ದುರ್ಗಾಪರಮೇಶ್ವರಿ ದೇಗುಲ ಸ್ವಚ್ಛತೆ

ಕೋಟತಟ್ಟು ಪಡುಕರೆ ಗದ್ದೆ ದುರ್ಗಾಪರಮೇಶ್ವರಿ ದೇಗುಲ ಸ್ವಚ್ಛತೆ

by Kundapur Xpress

ಕೋಟ : ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ವಲಯ ಸಾಲಿಗ್ರಾಮ, ಸಹಯೋಗದೊಂದಿಗೆ ೨೨೭ನೇ ವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಕೋಟತಟ್ಟು ಪಡುಕರೆ ಗದ್ದೆ ದುರ್ಗಾಪರಮೇಶ್ವರಿ ದೇಗುಲವನ್ನು ಸ್ವಚ್ಛಗೊಳಿಸಲಾಯಿತು.
ಕಾರಣಿಕ ಕ್ಷೇತ್ರವಾದ ಈ ದೇಗುಲವನ್ನು ಮೊಟ್ಟಮೊದಲ ಬಾರಿ ಅಭಿಯಾನ ಕೈಗೊಂಡ ಪಂಚವರ್ಣ ಹಾಗೂ ಇತರ ಸಂಸ್ಥೆಗಳಿಗೆ ಕೃತಜ್ಞತೆಯನ್ನು ದೇಗುಲದ ಮುಕ್ತೇಸರ ನಾಗರಾಜ್ ಕಾರಂತ್ ಕೃತಜ್ಞತೆ ಸಲ್ಲಿಸಿಕೊಂಡರು.ಪAಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸಂಚಾಲಕ ಅಮೃತ್ ಜೋಗಿ,ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಉಪಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಕಾರ್ಯದರ್ಶಿ ವಸಂತಿ ,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Related Articles