Home » ರಾಮಕ್ಷತ್ರಿಯ ಯುವಕ ಮಂಡಳಿ : ಪ್ರತಿಭಾ ಪುರಸ್ಕಾರ
 

ರಾಮಕ್ಷತ್ರಿಯ ಯುವಕ ಮಂಡಳಿ : ಪ್ರತಿಭಾ ಪುರಸ್ಕಾರ

by Kundapur Xpress
Spread the love

ಕುಂದಾಪುರ : ಶ್ರೀ ರಾಮಕ್ಷತ್ರಿಯ ಯುವಕ ಮಂಡಲ ಕುಂದಾಪುರ ಇದರ ವತಿಯಿಂದ 2024-25ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 95 ಹಾಗೂ ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ವು  ಕುಂದಾಪುರದ ಸೀತಾರಾಮಚಂದ್ರ  ಕಲ್ಯಾಣ ಮಂಟಪದಲ್ಲ ನಡೆಯಿತು. 

ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಲಕ್ಷ್ಮೀಶ ಹವಾಲ್ದಾರ್, ಕಾರ್ಯದರ್ಶಿ ನಾಗರಾಜ್ ನಾಯ್ಕ, ರಾಮಕ್ಷತ್ರಿಯ ಯುವಕ ಮಂಡಲದ ಅಧ್ಯಕ್ಷ ಕೆ. ರಾಜೇಶ್ ರಾವ್‌, ಗೌರವಾಧ್ಯಕ್ಷ ಪ್ರಭಾಕರ ರಾವ್ ನೇರಂಬಳ್ಳಿ, ಪ್ರಧಾನ ಕಾರ್ಯದರ್ಶಿ,ಅನಿಲ್ ಕುಮಾರ್ ಯು. ಕೆ., ಕೋಶಾಧಿಕಾರಿ ಸುರೇಶ್ ಕೆಳಮನೆ. ನಿಯೋಜಿತ ಅಧ್ಯಕ್ಷ  ನಾಗರಾಜ್ ದಫೇದಾರ್ ಹಾಗೂ  ರಾಮಕ್ಷತ್ರಿಯ  ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ವಿದ್ಯಾಲಕ್ಷ್ಮಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಕೆ. ರಾಜೇಶ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವಕ ಮಂಡಲದ ಕಾರ್ಯದರ್ಶಿ ಅನಿಲ್ ಕುಮಾ‌ರ್ ಯು.ಕೆ.ವಂದಿಸಿದರು. ಮಧುಕ‌ರ್ ಕೆ. ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!