152
ಕುಂದಾಪುರ : ನಗರದ ಚಿಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಯುವಕ ಮಂಡಲದಲ್ಲಿ ಪೊಲೀಸ್ ಜನ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು
ನಗರದ ಚಿಕ್ಕನಸಾಲು ರಸ್ತೆಯ ಬೀಟ್ ಪೊಲೀಸ್ ಸಂತೋಷರವರು ಯುವಕ ಮಂಲದ ಸಭಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪೊಲೀಸ್ ಇಲಾಖೆಯ ಹಲವು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದರು
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅಪರಾಧಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಆನ್ಲೈನ್ ವಂಚನೆ ಕ್ರಿಕೇಟ್ ಬೆಟ್ಟಿಂಗ್ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿದ್ದು ಸೈಬರ್ ಅಪರಾಧ ಹಾಗೂ ಇನ್ನಿತರ ಅಪರಾಧಗಳಲ್ಲಿ ತೊಡಗಿಸಿಕೊಂಡ ಯುವಕರ ಮಾಹಿತಿಯನ್ನು ನಮಗೆ ನೀಡಿದಲ್ಲಿ ಅವರನ್ನು ಸರಿದಾರಿಗೆ ತರುವ ಕಾರ್ಯವನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು
ವೇದಿಕೆಯಲ್ಲಿ ಮೈಲಾರೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ಹಾಗೂ ಕಾರ್ಯದರ್ಶಿ, ಶ್ರೀನಾಥ್ ಕೋಟೆ ಉಪಸ್ಥಿತರಿದ್ದರು

