Home » ತುಳುನಾಡಿನ ಹಿರಿಮೆ ಸಾರುವ ಕೆಲಸವಾಗಬೇಕಾಗಿದೆ
 

ತುಳುನಾಡಿನ ಹಿರಿಮೆ ಸಾರುವ ಕೆಲಸವಾಗಬೇಕಾಗಿದೆ

ಸುನಿಲ್‌ ಕುಮಾರ್‌

by Kundapur Xpress
Spread the love

ತುಳುನಾಡಿನ ಹಿರಿಮೆ ಸಾರುವ ಕೆಲಸವಾಗಬೇಕಾಗಿದೆ:ಸುನಿಲ್‌ ಕುಮಾರ್‌

ಕಾರ್ಕಳ:ಬೈಲೂರಿನ ಉಮಿಕಲ್‌ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮನ ಭವ್ಯಮೂರ್ತಿ ಹಾಗೂ ಥೀಮ್‌ ಪಾರ್ಕ್‌ ಲೋಕಾರ್ಪಣೆಯು ತುಳುನಾಡಿನ ಮಹತ್ವ ಸಾರುವ ಕೆಲಸವಾಗಲಿದೆ ಎಂದು ಲೋಕಾರ್ಪಣೆಯ ಪೂರ್ವಭಾವಿ ಸಭೆಯಲ್ಲಿ ಥೀಮ್‌ ಪಾರ್ಕ್‌ ನಿರ್ಮಾಣದ ರೂವಾರಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ ಸುನಿಲ್‌ ಕುಮಾರ್‌ ನುಡಿದರು

ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಕುರಿತಂತೆ ಇತಿಹಾಸಗಳಿದ್ದರೂ ಅವಳಿ ಜಲ್ಲೆಗಳಲ್ಲಿ ಮೂರ್ತಿಯಾಗಲಿ ಮ್ಯೂಸಿಯಮ್‌ ಆಗಲಿ ಇಲ್ಲದಿರುಹುದನ್ನು ಮನಗಂಡು ಬೈಲೂರಿನಲ್ಲಿ ಸ್ಥಾಪಿಸಿ ಇದರ ಮಹತ್ವವನ್ನು ಮುಂದಿನ ಪೀಳಿಗೆಗೆ ಸಾರುಹುದರ ಜೊತೆಗೆ ಪ್ರವಾಸೋದ್ಯಮ ತಾಣವಾಗಿಯೂ ಗುರುತಿಸಿಕೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು

ತಾಲೂಕು ಪಂಚಾಯತ್‌ ಕಾರ್ಯನಿರ್ಹಣಾಧಿಕಾರಿ ಗುರುದತ್‌ ಮಾತನಾಡಿ ಈ ತಿಂಗಳ ಅಂತ್ಯದಲ್ಲಿ ಜರಗುವ ಥೀಮ್‌ ಪಾರ್ಕ್‌ನ ಉಧ್ಘಾಟನೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು ಉದಯಾನಂದ ಪ್ರಾರ್ಥನೆ ಮಾಡಿ ವಿನಯನಾತು ಕಾರ್ಯಕ್ರಮ ನಿರೂಪಿಸಿದರು

 

Related Articles

error: Content is protected !!