Home » ಮಹೇಶ್‌ ಹೆಗ್ಡೆಯವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ
 

ಮಹೇಶ್‌ ಹೆಗ್ಡೆಯವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ

by Kundapur Xpress
Spread the love

ಕುಂದಾಪುರ : ಕಳೆದ 12 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಎಕ್ಸಲೆಂಟ್ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಯಲ್ಲಿ ಶ್ರಮವಹಿಸಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಗಾಗಿ ಮೊಳಹಳ್ಳಿ ಮಹೇಶ್‌ ಹೆಗ್ಡೆಯವರಿಗೆ ಬೆಂಗಳೂರಿನಲ್ಲಿ ನಡೆದ  ಸಮಾರಂಭದಲ್ಲಿ ಸುವರ್ಣ ಕನ್ನಡಿಗ 2025 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಮಾಡುವ ಸುವರ್ಣ ಕನ್ನಡಿಗ 2025 ಪ್ರಶಸ್ತಿಯು ಎಂ ಮಹೇಶ್ ಹೆಗ್ಡೆಯವರಿಗೆ ದೊರೆತಿರುವುದು ಅವರ ಸಾಧನೆಗೆ ದೊರೆತ ಪ್ರತಿಫಲವಾಗಿದ್ದು ಇದು ಎಕ್ಸಲೆಂಟ್ ಸಂಸ್ಥೆಯ ಕೀರ್ತಿ ಕಳಶಕ್ಕೆ ದೊರೆತ ಮತ್ತೊಂದು ಹಿರಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ

ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಹಾರಿಸಿದ ವಿದ್ಯಾರ್ಥಿಗಳು ಮತ್ತು ಭೋದಕ ಹಾಗೂ ಭೋದಕೇತರ ಸಿಬ್ಬಂದಿಯವರಿಗೆ ಅರ್ಪಿಸಿದ್ದಾರೆ

 

Related Articles

error: Content is protected !!