Home » ವಿಷ ಪದಾರ್ಥ ಸೇವಿಸಿದ್ದ ವ್ಯಕ್ತಿ ಸಾವು
 

ವಿಷ ಪದಾರ್ಥ ಸೇವಿಸಿದ್ದ ವ್ಯಕ್ತಿ ಸಾವು

by Kundapur Xpress
Spread the love

ಕುಂದಾಪುರ : ವಿಷ ಪದಾರ್ಥ ಸೇವಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಪುಟ್ಟಯ್ಯ (68) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುಟ್ಟಯ್ಯ ಅವರಿಗೆ 2019ರಲ್ಲಿ ನರದೌರ್ಬಲ್ಯದ ಕಾಯಿಲೆ ಉಂಟಾಗಿ ಮಣಿಪಾಲ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ನಂತರ ಕೊರೋನಾ ಸಂದರ್ಭ ಕ್ವಾರಂಟೈನ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯರ ಚಿಕಿತ್ಸೆಯಿಂದ ಸರಿಯಾಗಿ ಗುಣಮುಖವಾಗದೆ ಮಾನಸಿಕ ಖಿನ್ನತೆಯಲ್ಲಿ ಬಳಲುತ್ತಿದ್ದ ಅವರು ಮೇ 19ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!