Home » ಕರಿಮಣಿ ಸರ ಕಳವು : ಪ್ರಕರಣ ದಾಖಲು
 

ಕರಿಮಣಿ ಸರ ಕಳವು : ಪ್ರಕರಣ ದಾಖಲು

by Kundapur Xpress
Spread the love

ಬೈಂದೂರು : ಸಮೀಪದ ನಂದನವನ ಗ್ರಾಮದ ಪರಿಚಯ ಹೋಟೆಲ್ ಲಾಡ್ಜ್‌ನ ರೂಮಿನಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಳವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಜೂರು ಗ್ರಾಮದ ಮಾಲತಿ ಎಂಬವರು ಲಾಡ್ಜ್ ನ ರೂಮಿನಲ್ಲಿ ಉಳಿದುಕೊಂಡಿದ್ದು, ಮೇ 8ರಂದು ಬೆಳಗ್ಗೆ ರೂಂಗೆ ಬೀಗ ಹಾಕದೆ ಅವರ ತಾಯಿಯ ಮನೆ ಹೋಗಿದ್ದರು.

ಮಧ್ಯಾಹ್ನ ವಾಪಸ್ಸು ಬಂದು ನೋಡಿದಾಗ ರೂಂನ ಬಾಗಿಲು ತೆರೆದಿದ್ದು ಕಪಾಟಿನಲ್ಲಿದ್ದ 100 ಗ್ರಾಂ ಚಿನ್ನದ ಕರಿಮಣಿ ಸರ ಕಳವಾಗಿತ್ತು. ಹೊಟೇಲ್‌ನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಅದೇ ಹೊಟೇಲ್‌ನ 2ನೇ ಮಹಡಿಯ ರೂಂನಲ್ಲಿದ್ದ ವ್ಯಕ್ತಿಯು ಮಾಲತಿ ಅವರ ರೂಂಗೆ ಬಂದು ಹೋಗಿರುವುದು ಕಂಡುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!