Home ಶಿಕ್ಷಣಪರಾಕ್ರಮ ದಿವಸ್ ಆಚರಣೆ

ಪರಾಕ್ರಮ ದಿವಸ್ ಆಚರಣೆ

by Kundapur Xpress

ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಪರಾಕ್ರಮ ದಿವಸ್ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಮೃತಭಾರತಿ ವಿದ್ಯಾಲಯದ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮಹೇಶ್ ಹೈಕಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು ನೇತಾಜಿಯವರ ಜನ್ಮದಿನ ಬಗ್ಗೆ ಮಾತನಾಡಿ,

ನೇತಾಜಿಯವರು ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ವಿದೇಶದಲ್ಲಿದ್ದು ಕೊಂಡು ಹೋರಾಟವನ್ನು ಮಾಡಿದ ಧೀಮಂತ ನಾಯಕ, ರಾಷ್ಟ್ರೀಯ ಸೈನ್ಯವನ್ನು ಸ್ಥಾಪಿಸಿ ಹೋರಾಟದ ಕೆಚ್ಚು ತಂದ ವ್ಯಕ್ತಿ, ಆದ್ದರಿಂದ ನಾವೆಲ್ಲರೂ ನೇತಾಜಿಯವರ ಪುಸ್ತಕವನ್ನು ಓದಿ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು, ಗುರೂಜಿ ಮಾತಾಜಿಯವರು ಉಪಸ್ಥಿತರಿದ್ದರು

Related Articles