Home » ಶಾಂತಿಗಾಗಿ ಕುಂಭಮೇಳದಲ್ಲಿ ಮಣಿಪುರ ಸಿಎಂ ಪುಣ್ಯಸ್ನಾನ
 

ಶಾಂತಿಗಾಗಿ ಕುಂಭಮೇಳದಲ್ಲಿ ಮಣಿಪುರ ಸಿಎಂ ಪುಣ್ಯಸ್ನಾನ

by Kundapur Xpress
Spread the love

ಪ್ರಯಾಗ್‌ರಾಜ್ : ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು ಸಚಿವ ಸಂಪುಟದ ಕೆಲವು ಸಚಿವರು ಹಾಗೂ ಶಾಸಕರ ಜೊತೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ  ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ

ಆ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಟೋ ಹಂಚಿಕೊಂಡಿರುವ ಸಿಎಂ ಬಿರೇನ್ ಸಿಂಗ್  ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಾನದಲ್ಲಿ ನಿಂತಾಗ ದೈವಿಕ ಅನುಭವ ಪಡೆಯಬಹುದು. ತಂಪಾದ ನೀರು ದೇಹ ಹೊಕ್ಕಾಗ ಧೂಳನ್ನು ತೆಗೆದು ಹಾಕುವುದು ಮಾತ್ರವಲ್ಲದೇ, ದೇಹದ ಹೊರೆಗಳನ್ನು ತೊಳೆಯುತ್ತದೆ. ದೇಶ ಮತ್ತು ಮಣಿಪುರದ ಜನರ ಶಾಂತಿ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

 

Related Articles

error: Content is protected !!