ಕಾನ್ಸುರ : ಪಾಕಿಸ್ತಾನ ಪೋಷಿತ ಉಗ್ರವಾದವನ್ನು ಸರ್ಪಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವುಗಳು ಮತ್ತೆ ತಲೆ ಎತ್ತಿದರೆ, ಹುತ್ತದಿಂದ ಹೊರಗೆ ಎಳೆದು ಹೊಡೆದು ಹಾಕುತ್ತೇವೆ’ ಎಂದು ಕಠೋರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನಮ್ಮ ಬ್ರಹ್ಮಸ್ ಕ್ಷಿಪಣಿ ಪಾಕ್ ಸೇನೆಯ ನಿದ್ದೆ ಕೆಡಿಸಿದೆ’ ಎಂದೂ ಹೇಳಿದ್ದಾರೆ.
‘ಮೇ 9ರಂದು ಬೆಳಗ್ಗಿನ ನಮಾಜ್ ಬಳಿಕ ಭಾರತದ ಮೇಲೆ ದಾಳಿಗೆ ಸಜ್ಜಾಗಿದ್ದ ನಮ್ಮ ಮೇಲೆ ಬ್ರಹ್ಮಸ್ ದಾಳಿ ಮಾಡಿ ನಮ್ಮ ನಿದ್ದೆ ಗೆಡಿಸಿತು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ಬೆನ್ನಲ್ಲೇ ಮೋದಿ ಈ ನುಡಿಗಳನ್ನಾಡಿದ್ದಾರೆ.
ಬಿಹಾರದ ಕಾರಾಕಾಟ್ ಹಾಗೂ ಉತ್ತರ ಪ್ರದೇಶದ ಕಾನ್ಸುರದಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಮೋದಿ ಅವರು, ‘ಆಪರೇಷನ್ ಸಿಂದೂರ ಮುಗಿದಿಲ್ಲ, ಸ್ಥಗಿತವೂ ಆಗಿಲ್ಲ. ಅದು ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತವಷ್ಟೇ’ ಎಂದರು.
ಭರವಸೆ ಈಡೇರಿಸಿದೆ :
ಬಿಹಾರದ ಕಾರಾಕಟ್ನಲ್ಲಿ ಮಾತನಾಡಿದ ಅವರು, ಏ.22ರ ಪಹಲ್ಗಾಮ್ ನರಮೇಧದ ಮರುದಿನ ತಾವು ಬಿಹಾರದ ಮಧುಬನಿಯಲ್ಲಿ ಮಾಡಿದ ಭಾಷಣವನ್ನು ನೆನಪಿಸಿಕೊಂಡರು. ‘ಅಪರಾಧಿಗಳಿಗೆ ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯಾಗುತ್ತದೆ ಎಂದು ನಾನು ಭರವಸೆನೀಡಿದ್ದೆ. ಆ ಪ್ರತಿಜ್ಞೆಯನ್ನುಪೂರೈಸಿ ಇಂದು ನಾನು ನಿಮ್ಮೆದುರು ನಿಂತಿದ್ದೇನೆ.
ಭಾರತೀಯ ಮಹಿಳೆಯರು ಧರಿಸುವ ಸಿಂದೂರದ ತಾಕತ್ತನ್ನು ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವವೇ ನೋಡಿದೆ’ ಎಂದರು. ಪಾಕ್ ಸೇನೆಯ ರಕ್ಷಣೆಯಲ್ಲಿ ಉಗ್ರರು ಸುರಕ್ಷಿತರಾಗಿದ್ದರು. ಆದರೆ ಭಾರತ ಅವರನು ಮಂಡಿಯೂರುವಂತೆ ಮಾಡಿದೆ ಎಂದರು.

