82
ಹೊಸದಿಲ್ಲಿ: ಯಾವುದೇ ಪರಮಾಣು ದಾಳಿ ನೆರೆಯ ರಾಷ್ಟ್ರಕ್ಕೆ ಅಂತ್ಯ ತರುತ್ತದೆ ಎಂದು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಪ್ರತಿಪಾದಿಸಿದರು.
ಪಹಲ್ಯಾಮ್ ದಾಳಿಯಲ್ಲಿ ಕುಟುಂಬಗಳ ಮುಂದೆಯೇ ಹಿಂದೂ ಪುರುಷರನ್ನು ಭಯಾನಕವಾಗಿ ಕೊಲ್ಲಲಾಯಿತು. ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ ಸಂದರ್ಭೋಚಿತವಾಗಿತ್ತು. ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯವಿತ್ತು ಮತ್ತು ಅದನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.
ಭಯೋತ್ಪಾದಕ ಮೂಲ ಸೌಕರ್ಯದ ಮೇಲೆ ಆರಂಭಿಕ ದಾಳಿಗಳ ಬಳಿಕ ಪಾಕಿಸ್ತಾನ ಪ್ರತಿದಾಳಿ ನಡೆಸಿತ್ತು. ಆ ಸಂದರ್ಭದ ಮಿಲಿಟರಿ ಪ್ರತಿಕ್ರಿಯೆ ಅದ್ಭುತವಾಗಿತ್ತು. ಪಾಕಿಸ್ತಾನದ ವಾಯುನೆಲೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲಿನ ಪ್ರತಿದಾಳಿಗಳನ್ನು ಅತ್ಯುತ್ತಮ ಮಿಲಿಟರಿ ಕಾರ್ಯಾಚರಣೆ ಎಂದು ಬಣ್ಣಿಸಿದರು.

