163
ಕುಂದಾಪುರ : ಕಮಲಶಿಲೆ ಶ್ರೀ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಮ್ಮನವರ ಸನ್ನಿಧಿಯಲ್ಲಿ ಇಂದು ಶ್ರೀ ಮನ್ಮಹಾರಥೋತ್ಸವ ಜರುಗಲಿದೆ.
ಏ.16 ರಂದು ಅಂಕುರಾರೋಹಣ ಧ್ವಜಾರೋಹಣ ರಾತ್ರಿ ಭೇರಿ ತಾಡನ ಯಾಗಶಾಲಾ ಪ್ರವೇಶ ಕೌತುಕ ಬಂಧನ ಶಿಬಿಕಾಯನೋತ್ಸವ ನಡೆಯಿತು
ಏ. 17ರಂದು ಸಿಂಹವಾಹನೋತ್ಸವ ಜರುಗಿ ಏ.18 ರಂದು ಮಹಾರಂಗಪೂಜೆ, ಪುಷ್ಪಕವಾಹನೋತ್ಸವ ಜರುಗಿತು ಇಂದು ದೇವರ ಸನ್ನಿಧಿಯಲ್ಲಿ ಮನ್ಮಹಾರಥೋತ್ಸವ ಜರುಗಲಿದ್ದು ಊರ ಹಾಗೂ ಪರಊರಿನ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ
ದೇಗುಲ ಸನ್ನಿಧಿಯಲ್ಲಿ ಜರಗುವ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರರವರು ವಿನಂತಿಸಿಕೊಂಡಿದ್ದಾರೆ
ಫೋಟೊ : ಪ್ರಭಾ ಸ್ಟೂಡಿಯೋ , ಸಿದ್ದಾಪುರ

