166
ಬೆಂಗಳೂರು : ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನದಂದು ರಾಜ್ಯದಲ್ಲಿ 7,500 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಜಪಾನಿನ 15 ಕಂಪನಿಗಳು ಮುಂದೆ ಬಂದಿದ್ದು, ವಾಹನ ತಯಾರಿಕೆ, ಕೈಗಾರಿಕೆಗಳ ಸ್ವಯಂಚಾಲನೆ ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಿಗೆ ಆದ್ಯತೆ ನೀಡಿವೆ.
ಸಮಾವೇಶಕ್ಕೆ ಆಗಮಿಸಿರುವ ಕಿಯಿಚಿ ಒನೊ ಮತ್ತು ಭಾರತದಲ್ಲಿನ ಜಪಾನ್ ರಾಯಭಾರಿ ಕಾನ್ಸುಲ್ ಜನರಲ್ ತುತೊಮು ನಕಾನೆ ಅವರನ್ನು ಸಚಿವ ಪಾಟೀಲ ಅವರು ಭೇಟಿಯಾಗಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಬೃಹತ್ ಹೂಡಿಕೆಯಿಂದ ಉದ್ಯೋಗ ಸೃಷ್ಟಿ, ನಾವೀನ್ಯ ಮತ್ತು ಗಮನಾರ್ಹ ಆರ್ಥಿಕ ಪ್ರಗತಿ ಕಂಡುಬರಲಿದೆ. ಎಂದು ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ.

