Home » ಹಿಂದುಗಳು ಜಾಗೃತರಾಗಿರುವುದು ಅವಶ್ಯಕ : ಶ್ರೀ ವಚನಾನಂದ ಸ್ವಾಮೀಜಿ
 

ಹಿಂದುಗಳು ಜಾಗೃತರಾಗಿರುವುದು ಅವಶ್ಯಕ : ಶ್ರೀ ವಚನಾನಂದ ಸ್ವಾಮೀಜಿ

ಧರ್ಮಸ್ಥಳ ವಿರುದ್ದ ಷಡ್ಯಂತ್ರ ನಡೆದಿದೆ

by Kundapur Xpress
Spread the love

ಹಾವೇರಿ : ಹಿಂದುಗಳ ಪುಣ್ಯಕ್ಷೇತ್ರಗಳ ಬಗ್ಗೆ ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದ್ದು, ಈ ಬಗ್ಗೆ ಹಿಂದುಗಳು ಜಾಗೃತರಾಗಿರಬೇಕು. ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೆ, ಹಿಂದುತ್ವ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ವಿದೇಶಗಳಲ್ಲಿ 10 ವರ್ಷಗಳಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಇಡೀ ಜಗತ್ತೇ ಹಿಂದುತ್ವ ಆಗಬಹುದು ಎಂಬ ಭಯ ಕೆಲವರಿಗೆ ಕಾಡುತ್ತಿರುವುದರಿಂದ ಹಿಂದುಗಳ ಪುಣ್ಯಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆಯುತ್ತಿದೆ ಎಂದರು. ಭಾರತದ ಯಾವುದೇ ಹಿಂದು ಗುರುಗಳು ಮತಾಂತರ, ಧರ್ಮಾಂತರ ಮಾಡಿಲ್ಲ.

ಧರ್ಮದ ತತ್ವ ಸಿದ್ಧಾಂತಗಳನ್ನು ಬಿತ್ತುತ್ತಿದ್ದೇವೆ. ಧರ್ಮಸ್ಥಳ, ಶಬರಿಮಲೆ ಇನ್ನೂ ಅನೇಕ ಕಡೆ ಆಧ್ಯಾತ್ಮ ಗುರುಗಳ ಒಳ್ಳೆ ಕಾರ್ಯಗಳನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ, ಅಪಖ್ಯಾತಿ ತರುವ, ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲಾ ಹಿಂದುಗಳು ಡಾ.ವೀರೇಂದ್ರ ಹೆಗ್ಗಡೆ ಅವರ ಜೊತೆ ಇರಬೇಕು ಎಂದರು.

 

Related Articles

error: Content is protected !!