ಕುಂದಾಪುರ : ಸಿಎ, ಸಿಎಸ್ಇಇಟಿ ವೃತ್ತಿ ಪರ ಕೋರ್ಸ್ಗಳಿಗೆ ಹನ್ನೆರಡು ವರ್ಷಗಳಿಂದ ತರಬೇತಿ ನೀಡುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು iಟಿsಣiಣuಣe oಜಿ ಛಿomಠಿಚಿಟಿಥಿ seಛಿಡಿeಣಚಿಡಿies oಜಿ Iಟಿಜiಚಿ ಸಂಸ್ಥೆ ನಡೆಸಿದ ಸಿಎಸ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ೧೫ ವಿದ್ಯಾರ್ಥಿಗಳಲ್ಲಿ ೧೨ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಸಮೃದ್ ಆರ್ ಶೆಟ್ಟಿ (೧೬೬), ಆದಿತ್ಯ ಎಂ ಶೆಟ್ಟಿ (೧೫೩), ಕಿರಣ್ ಶೆಟ್ಟಿ (೧೫೧), ವರುಣ್ ಕೆ ಶೆಟ್ಟಿ (೧೪೪), ಸಾತ್ವಿಕ್ (೧೩೯), ಶ್ರೀ ಪಿ ಶೆಟ್ಟಿ (೧೩೭), ಗುರುಪ್ರಸಾದ್ ಪಿ (೧೧೪), ಗುರುಪ್ರೀತ್ ಹೆಚ್ (೧೧೧), ಸಮರ್ಥ (೧೦೫), ಸುಮುಖ ಶೆಟ್ಟಿ (೧೦೨), ಅನಘಾ ಶೆಟ್ಟಿ (೧೦೦), ನಿಶಾಂತ್ ಶೆಟ್ಟಿ (೧೦೦) ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.













