33
ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಅಮ್ಮುಂಜೆಯ ಹಳೆಯ ಮನೆಯ ವಠಾರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಗಣೇಶ್ (40) ಪತ್ತೆಯಾಗಿದ್ದಾರೆ.ಗಣೇಶ್ ತೆಂಗಿನಕಾಯಿ ಕೀಳುವ ಕೆಲಸ ಮಾಡಿಕೊಂಡಿದ್ದು, ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು.ಮರಣದಲ್ಲಿ ಸಂಶಯವಿರುವುದಾಗಿ ಗಣೇಶ್ ಅವರ ಭಾವ ಚೇರ್ಕಾಡಿ ಗ್ರಾಮದ ಚಂದ್ರಶೇಖರ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

