Home » ಜೆಇಇ ಅಡ್ವಾನ್ಸ್ – 2026 : ‘ಎಕ್ಸಲೆಂಟ್’ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವಲಯದಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಾಧನೆ
 

ಜೆಇಇ ಅಡ್ವಾನ್ಸ್ – 2026 : ‘ಎಕ್ಸಲೆಂಟ್’ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವಲಯದಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಾಧನೆ

by Kundapur Xpress
Spread the love

ಕುಂದಾಪುರ: ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆದ ಜೆಇಇ ಅಡ್ವಾನ್ಸ್ – 2026ರ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ಕುಂದಾಪುರದ ಪ್ರಸಿದ್ಧ ‘ಎಕ್ಸಲೆಂಟ್’ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವಲಯದಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಾಧನೆ ಮಾಡಿದೆ.

ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಯಾದ ಜೆ.ಎನ್. ಜ್ಞಾನ ಪುತ್ರನ್ ಅವರು ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಅತ್ಯಂತ ಕಠಿಣ ಶ್ರಮ ಹಾಗೂ ವ್ಯವಸ್ಥಿತ ಅಧ್ಯಯನದ ಮೂಲಕ ಪರೀಕ್ಷೆ ಎದುರಿಸಿದ್ದ ಜೆ.ಎನ್. ಜ್ಞಾನ ಪುತ್ರನ್ ಅವರು ಅಖಿಲ ಭಾರತ ಮಟ್ಟದಲ್ಲಿ (AIR) 8162ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ಆ ಮೂಲಕ ತಮ್ಮ ಹೆತ್ತವರಿಗೂ ಹಾಗೂ ತಮಗೆ ಶಿಕ್ಷಣ ನೀಡಿದ ಸಂಸ್ಥೆಗೂ ಅಪಾರ ಕೀರ್ತಿಯನ್ನು ತಂದಿತ್ತಿದ್ದಾರೆ.

ಸಂಸ್ಥೆಯಿಂದ ಗೌರವಪೂರ್ವಕ ಅಭಿನಂದನೆ:ರಾಷ್ಟ್ರ ಮಟ್ಟದ ಈ ಅತ್ಯುನ್ನತ ಸಾಧನೆಗಾಗಿ ವಿದ್ಯಾರ್ಥಿ ಜೆ.ಎನ್‌. ಜ್ಞಾನ ಪುತ್ರನ್ ಅವರನ್ನು ಸಂಸ್ಥೆಯ ವತಿಯಿಂದ ಶ್ಲಾಘಿಸಲಾಗಿದೆ. ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಎಂ. ಮಹೇಶ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಬೋಧಕ ಉಪನ್ಯಾಸಕ ವೃಂದ ಹಾಗೂ ಶಿಕ್ಷಕೇತರ ಬಳಗದವರು ಜಂಟಿಯಾಗಿ ವಿದ್ಯಾರ್ಥಿಯ ನಿರಂತರ ಶ್ರಮ ಮತ್ತು ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅವರ ಮುಂದಿನ ಉನ್ನತ ಶೈಕ್ಷಣಿಕ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

 

Related Articles

error: Content is protected !!