Home » ಸಂತಸದ ನಾಳೆಗಾಗಿ ವ್ಯಸನ ಮುಕ್ತ ಸಮಾಜ
 

ಸಂತಸದ ನಾಳೆಗಾಗಿ ವ್ಯಸನ ಮುಕ್ತ ಸಮಾಜ

ಕೋಟದ ಪಂಚವರ್ಣದಿಂದ 2ನೇ ಮಾಲಿಕೆ

by Kundapur Xpress
Spread the love

ಕೋಟ : ಇಂದು ಇಡೀ ವ್ಯವಸ್ಥೆಯನ್ನು ಕಾಡುತ್ತಿರುವ ಮಾದಕ ವಸ್ತುಗಳಿಂದ ಮಕ್ಕಳ ಭವಿಷ್ಯಕ್ಕೆ ಸಂಚಕಾರ ತಂದೊಡ್ಡುತ್ತಿದೆ ಇದರ ಬಗ್ಗೆ ಜಾಗೃತರಾಗುವುದು ಅತ್ಯವಶ್ಯಕ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಮಾಧವ ಪೈ ಎಚ್ಚರಿಸಿದ್ದಾರೆ.

ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಸಮಾಜದ ಅರಿವು ಮೂಡಿಸುವ ದೃಷ್ಟಿಯಿಂದ ವ್ಯಸನಮುಕ್ತ ಸಮಾಜ ಸಂತಸದ ನಾಳೆಗಾಗಿ ಎನ್ನುವ ಶೀರ್ಷಿಕೆಯಡಿ ಗುಂಡ್ಮಿ ಸರಕಾರಿ ಪ್ರೌಢಶಾಲೆಯಲ್ಲಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಾದಕ ವಸ್ತುಗಳಿಂದ ಇಡೀ ಯುವ ಜನಾಂಗ ದಾರಿ ತಪುö್ಪತ್ತಿದೆ.ಅದೇ ಜೀವನವಲ್ಲ ಬದಲಾಗಿ ನೈಜತೆಯನ್ನು ಹೊಂದಿರುವ ಶ್ರೇಷ್ಠ ಪರಂಪರೆಯನ್ನು ಹೊಂದಿದ ಭರತಖಂಡದಲ್ಲಿ ಮಾದಕ ವಸ್ತುಗಳ ವಿರುದ್ಧ ಬಹೃತ್ ಆಂದೋಲನ ಅಗತ್ಯವಾಗಿದೆ. ಆರೋಗ್ಯವಂತ ದೇಹವನ್ನು ಹೇಗೆ ಇರಿಸಿಕೊಳ್ಳಬೇಕು, ದುಷ್ಚಟದಿಂದ ಮಾನಸಿಕ ನೆಮ್ಮದಿ ಕೆಡುತ್ತಿರುವ ಬಗೆಗಿನ ಬಗ್ಗೆ ವಿವರವಾಗಿ ತಿಳಿಸಿ,ಒಳ್ಳೆಯ ಆಲೋಚನೆಗಳೊಂದಿಗೆ ಸುಂದರ ನಾಳೆಗಾಗಿ ಬದುಕಲು ಕರೆ ನೀಡಿದರು.

ಕಾರ್ಯಕ್ರಮವನ್ನು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ ಉದ್ಘಾಟಿಸಿ ಯುವ ಜನಾಂಗ ದಾರಿ ತಪ್ಪುತ್ತಿರುವ ಬಗ್ಗೆ ಪೋಷಕರು ಜಾಗೃತರಾಗುವುದು ಒಳಿತು.ಮೊಬೈಲ್ ಗೀಳುಗಳಿಂದ ಹೊರಬನ್ನಿ ಎಂದರು.

ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಸ್ವಾಗತಿಸಿ ಪರಿಚಯಿಸಿದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು. ಉಪಾಧ್ಯಕ್ಷ ದಿನೇಶ್ ಆಚಾರ್ ಸಹಕರಿಸಿದರು.

 

 

 

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವ್ಯಸನಮುಕ್ತ ಸಮಾಜ ಸಂತಸದ ನಾಳೆಗಾಗಿ ಎನ್ನುವ ಶೀರ್ಷಿಕೆಯಡಿ ಗುಂಡ್ಮಿ ಸರಕಾರಿ ಪ್ರೌಢಶಾಲೆಯಲ್ಲಿ ಎರಡನೇ ಸರಣಿ ಕಾರ್ಯಕ್ರಮವನ್ನು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ ಉದ್ಘಾಟಿಸಿ ಮಾತನಾಡಿದರು. ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಮಾಧವ ಪೈ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ, ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಇದ್ದರು.

ಕೋಟ.ಅ.೧ ವ್ಯಸನಮುಕ್ತ

 

Related Articles

error: Content is protected !!