ತ್ರಿಶಾ ವಿದ್ಯಾ ಕಾಲೇಜು, ಕಟಪಾಡಿ - ‘ವಂದೇ ಮಾತರಂ ಮತ್ತು ಸ್ವಾತಂತ್ರ್ಯ’ ಕುರಿತು ವಿಶೇಷ ಕಾರ್ಯಕ್ರಮ

by Kundapur Xpress
Spread the love

ಕಟಪಾಡಿ, : ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ.) ಉಡುಪಿ ಜಿಲ್ಲಾ ಸಮಿತಿ ಹಾಗೂ ತ್ರಿಶಾ ವಿದ್ಯಾ ಕಾಲೇಜಿನ ಸಹಯೋಗದಲ್ಲಿ ‘ವಂದೇ ಮಾತರಂ ಮತ್ತು ಸ್ವಾತಂತ್ರ್ಯ’ ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಅರೆಶಿರೂರ್, ವಾಗ್ಮಿಗಳು ‘ವಂದೇ ಮಾತರಂ’ ಗೀತೆಯ ಹಿನ್ನೆಲೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅದರ ಮಹತ್ವ ಹಾಗೂ ದೇಶಭಕ್ತಿಯ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಂದೇ ಮಾತರಂ ಕೇವಲ ಒಂದು ಗೀತೆಯಾಗಿರದೆ, ಭಾರತೀಯರ ಸ್ವಾತಂತ್ರ್ಯ ಚಳವಳಿಯ ಉತ್ಸಾಹ, ದೇಶಪ್ರೇಮ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂಬ ಸಂದೇಶವನ್ನು ನೀಡಲಾಯಿತು. ವೇದಿಕೆಯಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲದೀಪ್ ವೈ ಉಪಸ್ಥಿತರಿದ್ದರು ವಿದ್ಯಾರ್ಥಿನಿ ವಸುಪ್ರಧಾ ಸ್ವಾಗತಿಸಿ, ಅನ್ಯ ಆಚಾರ್ಯ ಗಣ್ಯರನ್ನು ವಂದಿಸಿದರು.

 

Related Articles

error: Content is protected !!