273
ನವದೆಹಲಿ : ಆರ್ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಎಂಟು ಭಯೋತ್ಪಾದಕರನ್ನು ಅಸ್ಸಾಂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕೇರಳದಿಂದ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (STF) ಎಂಟು ಭಯೋತ್ಪಾದಕರನ್ನು ಬಂಧಿಸಿದೆ
ಬಂಧಿತರ ಪೈಕಿ ಅಲ್-ಖೈದಾ ಅಂಗ ಸಂಸ್ಥೆಯ ಸದಸ್ಯನೂ ಆದ ಬಾಂಗ್ಲಾದೇಶದ ಭಯೋತ್ಪಾದಕ ಕೂಡಾ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಬಾಂಗ್ಲಾದೇಶದ ಉಗ್ರ ಸದ್ ರಾಡಿ ಅಕಾ ಶಾಬ್ ಸೇಖ್ (32) ನವೆಂಬರ್ನಲ್ಲಿ ಭಾರತಕ್ಕೆ ಬಂದು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಸ್ವೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿದ್ದ. ನಂತರ ಕೇರಳಕ್ಕೆ ತೆರಳಿದ್ದ ಎಂದು ಎಸ್ಟಿಎಫ್ ತಿಳಿಸಿದೆ.

